Monday, 4 January 2016

ಆರೋಹಣ

ನಿರರ್ಗಳವಾದ ಮೌನ
ನಿಯಮಗಳ ದಹನ
ಆಲೋಚನೆಗಳ ಮನ
ಅನುಭವದ ಸ್ನಾನ
ಸಪ್ತಸ್ವರಗಳ ಅವರೋಹಣ
ಕ್ಷಣದಣುವು ಸಮರ್ಪಿತ
ನನ್ನಾತ್ಮದ ಇಚ್ಛೆಗೆ
ಸತ್ಯದ ಸೋಪಾನ
ಅಡೆತಡೆಗೆ ಹೆದರದೆ,
ಅದಕೆ ಸ್ಪಂದಿಸದಿರುವ,
ಅನೂಹ್ಯಸುಖದ
ಅನಾವರಣ
ಇದುವೆ ನನ್ನ ಜೀವನದ
               ಆರೋಹಣ.




 

Saturday, 7 November 2015

ನನಗಾಗಿ ನನ್ನ ಇಷ್ಟದಂತೆ ಇರಲಿ ,ನನ್ನಪಾಡಿಗೆ ಇರಲು ಬಿಡದ ಈ ಸಮಾಜದಲ್ಲಿ ಬದುಕಲೇಬೇಕಾದ ಪರಿಸ್ಥಿತಿ. ಬದುಕಿಗೆ ನಿಯಮಗಳ ಅಗತ್ಯ ಇಲ್ಲ ಆದರೆ ಎಲ್ಲರಿಗು ಬದುಕಿನಲ್ಲಿ ಅವರದೇ ಆದ ನಂಬಿಕೆಗಳು ಇರುತ್ತದೆ. I am sensitive ಈ ವಾಕ್ಯ ನನ್ನ ಬದುಕಿನ ಕಡು ಕಷ್ಟ ಪರಿಸ್ಥಿತಿಗೆ ತಂದಿದೆ  ಎನ್ನಬೇಕೆ that's why even I am sensitive about other's feelings. ಇದು ಸಂತಸದ ವಿಷಯ ಎನ್ನಲೇ.ನನ್ನ ಆಸಕ್ತಿ  ನನ್ನನ್ನು ಬಹಿರ್ಮುಕಳಾಗಿ ಪ್ರತಿಬಿಂಬಿಸುತ್ತದೆ .ಪ್ರಾಪಂಚಿಕ ಕಾರ್ಯಗಳು ನನ್ನ ಆಸಕ್ತಿಗಳಲ್ಲಿ ಇರುವುದರಿಂದ ಆ ಊಹೆ ಸಹಜ ಸಹಾ.ಆದರೆ ನನ್ನನ್ನು ನನ್ನೊಳಗೆ ಬೆಚ್ಚಿಬೀಳಿಸುವ ಸಂಗತಿ ಎಂದರೆ  I will participate in the maximum activities but I will be unattached to persons where as I am only in love with my interest but never with the people.ನನ್ನ ಈ ನಡವಳಿಕೆಗೆ ನನ್ನದೇ ಉತ್ತರ.ಇನ್ನೊಬ್ಬರ ಬಳಿ ಮಾತಾಡುವಾಗ ಪ್ರತಿ ಭಾರಿ ಇನ್ನೊಬ್ಬರ ಭಾವನೆಗೆ ಬೆಲೆ ಕೊಡುವ ನನಗೆ,ಇನ್ನೊಬ್ಬರ ನೊಯಿಸುವುದು ಇಷ್ಟವಿಲ್ಲ. ಹಾಗೆ ಮಾತು, ನಡವಳಿಕೆ,ಸಮಯ ಏನಕ್ಕೂ ಬೆಲೆ ಕೊಡದವರ ನಡುವೆ ಅವರ ಮಾತುಗಳ ಕೇಳಿಸಿಕೊಳ್ಳಲು ನಾನು ಅಸಹನೀಯಳು.ನಿರ್ಮಲವಾದ ಮನಸ್ಸನ್ನು ನಂಬಿರುವ ನನಗೆ ಇದನ್ನು ನೊಯಿಸಲು ಇಷ್ಟ ಇಲ್ಲ ಹಾಗೆಂದು ಸಮಾಜವನ್ನು ತಬ್ಬಲಾರೆ ಅದಕ್ಕಾಗಿ ನಾ ಹೀಗೆ.--------ಅನೂಹ್ಯ

Saturday, 10 October 2015


INTERNET

ಮೌನದ ಒಮ್ಮತ
ನಿನ್ನ ಈ ಸಹಮತ
ಕಳೆದೋಯ್ತು ನನ್ನ ಮಿಡಿತ
ಏನು ನಿನ್ನೀ ಸೆಳೆತ
     
ಚಾರುಶ್ರೀ ಕೆ ಎಸ್

Just can't live without internet

Wednesday, 7 October 2015

 


Each desire is having a great density. I don't know where it will end as what.

Sometiomes life will make you to fear.this is wrong statement but society will make you to feel so.again this will become wrong statement for the person who know realy what he is.If difficult  situation exist that is when we can't find someone like we on the way or if we are different from the normal routine of the people in the society it is strange to accept the condition.because the mean of happiness is different to us from others I BELIEVE WHAT I BELIEVE IS THE BEST.

ಬದುಕು

ಬಯಸಿದ್ದು ಸಿಗದಿದ್ದಾಗ
ಬಯಸದಿದ್ದದ್ದು ದೊರಕಿದಾಗ
ಅದರಿಂದಲು ಬಯಸುವುದೇ
         
           ಬದುಕು 

Tuesday, 6 October 2015

ಅರಿಯಬೇಕು

ನಾಅರಿಯೆ ನನ್ನರಿಯೆ ಏನರಿಯಲೆ
ಅರಿಯದ ಲೋಕಕ್ಕೆ ಅರಿಯದಾಗೆಬಂದು
ನನ್ನ ಅರಿತವರು ಇಡುವ ನಾಮತಿಳಿಯಲೆ
ನಿಘೂಡ ಹುಟ್ಟಿನ ಧ್ಯೇಯ ಅರಿಯಲೆ

ನಾಅರಿಯೆ  ನನ್ನರಿಯೆ ಏನರಿಯಲೆ
ಸಂಬಂಧ ಎಂಬ ಬೆಸುಗೆಗೆಮಾರಿಹೋಗಲೆ
ಬಂಧಗಳ ನಾಮಸ್ಮರಣೆ ಮಾಡಲೇ
ಮತಿಇಲ್ಲದಂತೆ ಇದಕ್ಕಾಗಿ ಹೆಣಗಾಡಲೆ

ನಾಅರಿಯೆ ,ನನ್ನರಿಯೆ, ಏನರಿಯಲೆ
ಪ್ರೀತಿಯೆಂಬ ಮಾಯೆಗೆ ಭಿಕ್ಷುವಾಗಲೆ
ಅರ್ಥವಿಲ್ಲದ ಪದಕ್ಕೆ ಭಾವತುಂಬಿ
ಅದರ ಸೆರೆಗೆ ಸಿಕ್ಕಿ ಸಾಯಲೆ


ನಾಅರಿಯೆ ,ನನ್ನರಿಯೆ, ಏನರಿಯಲೆ
ಹುಟ್ಟಿದಮೇಲೆ ಬವಣೆಯಾದರು ಬದುಕಬೇಕು
"ಹಣ" ವೆಂಬ ನಿರ್ಜೀವ ವಸ್ತುಗೆ ಜೀವವ
ಮರೆತು,ಹಗಲಿರುಳು ದುಡಿಯಲೇ

ನಾಅರಿಯೆ ,ನನ್ನರಿಯೆ, ಏನರಿಯಲೆ
ಸರ್ವಶ್ರೇಷ್ಠ ಈ ಜ್ಞಾನ, ಅಂತ್ಯವೇ ಇಲ್ಲದ
ಇದರ ಹುಡುಕಾಟದಲ್ಲಿ ನನ್ನಮರೆಯಲೆ
ತಿಳಿಯಲಾಗದದನ್ನು ತಿಳಿಯಲೇ

ನಾಅರಿಯೆ ,ನನ್ನರಿಯೆ, ಏನರಿಯಲೆ
ಅರಿಷಡ್ವರ್ಗಗಳೇ ನನ್ನ ಆಸ್ತಿ
ಮತ್ತೆ ಮಾಡಲೇ ನಾನು ಆಸ್ತಿಯ
 ಸುಳ್ಳಿನ ಶ್ರೇಣಿಯ ಏರಲೇ


ನಾಅರಿಯೆ ,ನನ್ನರಿಯೆ, ಏನರಿಯಲೆ
ಪ್ರೀತಿ, ಸಂಬಂಧ,ಹಣ,ವಿದ್ಯೆ ಯಾವುದು ಸತ್ಯ
ಪರಮನಿಷ್ಠ ಬಾಳಲಾರ,ಕ್ರೂರವ್ಯವಸ್ತೆಯು
ಸತ್ಯ,ಇದರ ವ್ಯಥೆಯು ಸತ್ಯ


ನಾಅರಿಯೆ ,ನನ್ನರಿಯೆ, ಏನರಿಯಲೆ
ಈ ಸಪ್ತಸಾಗರಗಳ ಅರಿಯಬಹುದು
ಆದರೆ ಅರಿಯಲಾರೆ ನಾನು ಈ ಮನಸ
ಸತ್ಯವ ಅಸತ್ಯ ದುಃಖವ ಸುಖ ಎನ್ನುವುದು
ಈ ಮನಸು ವಿಶಾಲವಾದುದು
ಸಪ್ತಸಾಗರ,ವಿಶ್ವ, ಸೃಷ್ಟಿಯ ಮೀರಿದುದು
ನಾ ಅರಿಯಬೇಕು ಈ ಮನಸ.